ಪೋಲೀಯೋ ಅಂತ್ಯಗೊಳಿಸಲು ತಿರುಪತಿಗೆ ಸೈಕಲ್ ಯಾತ್ರೆಗೆ ಸಿಎಂಆರ್ ಶ್ರೀನಾಥ್ ಚಾಲನೆ ಕೋಲಾರ : ಜಗತ್ತಿನಿಂದ ಪೋಲೀಯೋವನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವ ರೋಟರಿ ಸಂಸ್ಥೆಯ ಹಿರಿಯ ಸದಸ್ಯರು ಕೋಲಾರ ನಗರದಿಂದ ತಿರುಪತಿಗೆ ಸೈಕಲ್ ಯಾತ್ರೆಯನ್ನು ಶನಿವಾರ ಬೆಳಿಗ್ಗೆ ರೋಟರಿ ಸೆಂಟ್ರಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಕಾಮಧೇನು ಯೋಜನೆ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್, ಚಾಲನೆ ನೀಡಿದ್ದಾರೆ ಅಧ್ಯಕ್ಷ ಸೈನ್ಸ್ ನಾಗರಾಜ್, ವಲಯ ಕಾರ್ಯದರ್ಶಿ ಎಸ್.ಸುಧಾಕರ್ ಹಾಗೂ ವಲಯ ಅಧ್ಯಕ್ಷ ರವೀಂದ್ರನಾಥ್ ಸೈಕಲ್ ತಂಡಕ್ಕೆ ಪೋಲೀಯೋ ನಿರ್ಮೂಲನೆ ಸಂದೇಶದ ಕೆಂಪು ಬಾವುಟವನ್ನು ಪ್ರದರ್ಶಿಸಿ ಚಾಲನೆ ನೀಡಿದರು.