ನಗರದ ವಿವಿಧಡೆ ಸಂಚಾರ ನಡೆಸಿದ ಉಪಲೋಕಾಯುಕ್ತ ವೀರಪ್ಪ ಗುರುವಾರ ಬೆಳಗ್ಗೆ ಏಳು ಗಂಟೆಯಲ್ಲಿ ಕೋಲಾರ ನಗರದಲ್ಲಿ ಬಿರುಸಿನ ಸಂಚಾರ ನಡೆಸಿದ ಉಪ ಲೋಕಾಯುಕ್ತ ಬಿ.ವೀರಪ್ಪ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಬಿಸಿಎಂ ಹಾಸ್ಟೆಲ್, ಕೋಲಾರಮ್ಮ ಅಮಾನಿ ಕೆರೆ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾದ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರನ್ನು ತರಾಟೆಗೆ ಸ್ಥಳಗಳಿಗೆ ತೆಗೆದುಕೊಂಡರು. ಗುರುವಾರ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ಉಪಲೋಕಾಯುಕ್ತರು, ಬಸ್ ನಿಲ್ದಾಣದಲ್ಲಿ ಸ್ವಚ್ಚತೆ, ಅಂಗಡಿ ಮಳಿಗೆಗಳಲ್ಲಿನ ಸಮಾಗ್ರಿಗಳನ್ನು ತಯಾರಿಸಿದ ದಿನಾಂಕ,ಅವಧಿ ಮುಗಿದ ದಿನಾಂಕ ಗಮನಿಸಿದರು. ನಂತರ