ಜೆಪಿ ಭವನದಲ್ಲಿ ಶಿಡ್ಲಘಟ್ಟ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 3:30 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಶಿಡ್ಲಘಟ್ಟದ ಪೌರಾಯುಕ್ತೆ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಮಾತಾಡಿರೋದು ಜಾಗಜ್ಜಾಹಿರವಾಗಿದೆ. ದ್ವೇಷ ಭಾಷಣ ಜಾರಿ ಮಾಡಿರೋದು ಕೇವಲ ವಿರೋಧ ಪಕ್ಷ ಮಾಧ್ಯಮಗಳಿಗೆ ಮಾತ್ರಾನ..? ಮಾದ್ಯಮ ವಿರೋದ ಪಕ್ಷವನ್ನ ಕಟ್ಟಿಹಾಕೋದಕ್ಕೆ ಮಾತ್ರ ಅನ್ವಯ. ಕಾಂಗ್ರೆಸ್ ನವರಿಗೆ ಅನ್ವಯ ಆಗೊಲ್ಲಾ, ವಿರೋಧ ಪಕ್ಷದವರನ್ನ ಕಟ್ಟಿ ಹಾಕೋದಕ್ಕೆ ಈ ಬಿಲ್ ತಂದಿದ್ದಾರೆ. ಕುಮಾರಸ್ವಾಮಿ ಅವರು ಈಗಾಗಲೇ ಸಿಎಸ್ ಜೊತೆ ಮಾತಾಡಿದ್ದಾರೆ. ಸರ್ಕಾರಕ್ಕೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ರೆ ದಯದಾಕ್ಷಿಣ್ಯ ನೋಡದೆ ಕ್ರಮ ತೆಗೆದುಕೊಳ್ಳಬೇಕು.