ರಾಜೀವ್ ಗೌಡ ಬಂಧನ ಪ್ರಕ್ರಿಯೆ ವಿಳಂಬ ಆರೋಪ ವಿಚಾರಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್ ಅವರು, ವಿಳಂಬ ಅಲ್ಲ, ಅದಕ್ಕಾಗಿ ಟೀಂ ಮಾಡಿದ್ದಾರೆ. ಹುಡ್ಕೊಂಡು ಕರೆದುಕೊಂಡು ಬರ್ತಾರೆ. ವಿಳಂಬ ಅಂದ್ರೆ ಹೇಗೆ? ತಪ್ಪಿಸಿಕೊಂಡು ಹೋದವರನ್ನ ಹುಡುಕಿಕೊಂಡು ಬರಬೇಕು ಅಲ್ವಾ? ಅದಕ್ಕೇನು ಟೈಮ್ ನಿಗದಿ ಮಾಡಿದ್ದೀರಾ ನೀವು ಎಂದು ಗರಂ ಆದ ಅವರು, ಜೆಡಿಎಸ್, ಬಿಜೆಪಿ ಕೇಳಿಕೊಂಡು ನಾವು ಆಡಳಿತ ಮಾಡುತ್ತಿಲ್ಲ. ಅವರನ್ನ ಬಂಧಿಸುವಂತೆ ಸೂಚನೆ ನೀಡಿದ್ದೇನೆ, ಬಂಧಿಸುತ್ತಾರೆ ಎಂದರು.