ಶಿರಸಿ: ಟಿಆರ್ಸಿ ಸಭಾಂಗಣದಲ್ಲಿ ಗಮನ ಸೆಳೆದ ಭೀಮಸೇನ ಜೋಶಿ ಸ್ಮರಣೆ ಪ್ರಯುಕ್ತ ನಡೆದ ಗಾಯನ ಕಾರ್ಯಕ್ರಮ
ಶಿರಸಿ: ಇಲ್ಲಿನ ಪ್ರಜ್ವಲ ಟ್ರಸ್ಟ್ ಮತ್ತು ಸುರ್ ಸಪ್ತಕ ಮ್ಯೂಸಿಕ್ ಟ್ರಸ್ಟ್ ನಿಂದ ತಾರ ಶಡ್ಜ ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ಸ್ಮರಣೆ ಪ್ರಯುಕ್ತ ಗಾಯನ ಕಾರ್ಯಕ್ರಮ ನಗರದ ಟಿ.ಆರ್.ಸಿ ಸಭಾಂಗಣದಲ್ಲಿ ರವಿವಾರ ಗಮನ ಸೆಳೆಯಿತು. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅನಂತಮೂರ್ತಿ, ಪಂಡಿತ್ ಭೀಮಸೇನ ಜೋಶಿ ಅವರು ಅವತಾರ ಪುರುಷರು. ಶಿರಸಿಯಲ್ಲಿ ಇಂಥದೊಂದು ಕಾರ್ಯಕ್ರಮ ನಡೆಸುವದು ಅಪರೂಪದ್ದು ಎಂದರು. ಈ ವೇಳೆ ಅಶೋಕ ಗರಗಟ್ಟಿ ಬೆಳಗಾವಿ, ದತ್ತಾತ್ರಯ ಹೆಗಡೆ ಮುತ್ಮುರಡು, ಅನಿಲ್ ಚೌಧರಿ ಇದ್ದರು.