ಗದಗ: ನ್ಯಾಯ ವಿಧಾನ ಪದ್ಧತಿಯಲ್ಲಿ ವಿಶೇಷ ಸುಧಾರಣೆ: ನಗರದಲ್ಲಿ ಸಚಿವ ಎಚ್.ಕೆ. ಪಾಟೀಲ
Gadag, Gadag | Jun 2, 2025 ನ್ಯಾಯ ವಿಧಾನ ಪದ್ಧತಿಯಲ್ಲಿ ವಿಶೇಷ ಸುಧಾರಣೆಗಳನ್ನು ಕಾಣುತ್ತಿದ್ದೇವೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ಸಾಮಾನ್ಯರ ಪ್ರಕರಣಗಳು ಎರಡು ವರ್ಷಗಳೊಳಗಾಗಿ ಪೂರ್ಣಗೊಳಿಸುವದರ ಮೂಲಕ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗದಂತೆ ನ್ಯಾಯ ಒದಗಿಸಲು ಈ ಕಾನೂನು ತಿದ್ದುಪಡಿ ಮಾಡಲಾಗಿದೆ ಎಂದರು. ರಾಜ್ಯ ಸರ್ಕಾರವು ಸಿವಿಲ್ ಪ್ರೊಸಿಸರ್ ಕೋರ್ಟ ತಿದ್ದುಪಡಿ ಮಾಡಿ ಕೇಸ್ ಮ್ಯಾನೆಜಮೆಂಟ್ ಸಿಸ್ಟಮಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು ವ್ಯಾಜ್ಯದಲ್ಲಿ ಸಿ.ಪಿ.ಸಿ ಅಮೆಂಡಮೆಂಟ್ 2 ಜಾರಿಗೆ ಬಂದಿದೆ ಇದರಲ್ಲಿ ಸಿವಿಲ್ ಕೇಸಗೆ ಕಡ್ಡಾಯವಾಗಿ ರಾಜಿಗೆ ಅವಕಾಶ ಮಾಡಿಕೊಡಲಾಗುವದು.