ಕೋಲಾರ: ವಕ್ಕಲಿಗರ ಸಂಘ ಸಮುದಾಯದ ಬಡವರು, ಪ್ರತಿಭಾವಂತರ ನೆರವಿಗೆ ನಿಲ್ಲುವಂತಾಗಲಿ : ನಗರದಲ್ಲಿ ನಂಜಾವಧೂತ ಸ್ವಾಮೀಜಿ
Kolar, Kolar | Nov 5, 2025 ವಕ್ಕಲಿಗರ ಸಂಘ ಸಮುದಾಯದ ಬಡವರು, ಪ್ರತಿಭಾವಂತರ ನೆರವಿಗೆ ನಿಲ್ಲುವಂತಾಗಲಿ : ನಂಜಾವಧೂತ ಸ್ವಾಮೀಜಿ ವಕ್ಕಲಿಗರ ಸಂಘದಲ್ಲಿ ೭೩೮ ಕೋಟಿ ಹಣವಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರುಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಿ ಎಂದು ತುಮಕೂರಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಕರೆ ನೀಡಿದರು. ನಗರ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅವಿಭಜಿತ ಜಿಲ್ಲೆಯ ಆಶ್ರಯದಲ್ಲಿ ಬುಧವಾರ ನಡೆದ ಬಾಲಕಿಯರ ಹಾಸ್ಟೆಲ್ ಶಂಕುಸ್ಥಾಪನಾ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮು