ನಿನ್ನೆ ರಾಹುಲ್ ಗಾಂಧಿ ಭೇಟಿ ವಿಚಾಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅಂತಿಮವಾಗಿ ತೀರ್ಮಾನ ಮಾಡೋದು ಹೈಕಮಾಂಡ್, ರಾಜ್ಯದ ಬಗ್ಗೆ ರಿಪೋರ್ಟ್ ಮಾಡೇ ಮಾಡ್ತೇವಿ. ವೋಟ್ ಚೋರಿ ಬಗ್ಗೆ ಹೇಗೆ ಅಂತಾ ಚರ್ಚೆ ಮಾಡಿದ್ದೇನೆ. ಕುರ್ಚಿ ವಿಚಾರ, ಸಿಎಂ ಡಿಸಿಎಂ ಇಬ್ಬರೂ ಹೈಕಮಾಂಡ್ ತೀರ್ಮಾನ ಕ್ಕೆ ಬಿಟ್ಟಿದ್ದಾರೆ. ವರಿಷ್ಠರ ಅಂಗಳದಲ್ಲೇ ಗೊಂದಲ ಬಗೆಹರಿಯಬೇಕಲ್ವಾ, ಈ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡೋದಾಗಿ ಹೇಳಿದ್ದಾರೆ, ಹೈಕಮಾಂಡ್ ತೀರ್ಮಾನ ಮಾಡಲಿದೆ, ಅದರಲ್ಲಿ ಗೊಂದಲ ಏನಿದೆ ಎಂದರು.