ಮುಂಬೈ ಪಾಲಿಕೆಯಲ್ಲಿ ಎನ್ಡಿಎ ಮೈತ್ರಿ ಗೆಲುವು ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು, ಎಕ್ಸಿಟ್ ಫೋಲ್ ಗಳಲ್ಲಿ ಪ್ರಥಮ ಬಾರಿಗೆ ಬಿಜೆಪಿ- ಶಿವಸೇನೆ ಮೈತ್ರಿ ಇದೆ. ಸಂಪೂರ್ಣ ಬಹುಮತ ಬರುತ್ತೆ ಅಂತ ನೀವೆ ಹೇಳಿದ್ದೀರಾ. ಅದೇ ರೀತಿ ಮುಂಬೈನಲ್ಲಿ ಪ್ರಥಮ ಬಾರಿಗೆ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಮಹಾರಾಷ್ಟ್ರ ಸಿಎಂ,ಪಿಎಂ ಮೋದಿ ಅವ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮುಂಬೈ ಫಲಿತಾಂಶ ಜಿಬಿಎ ಚುನಾವಣೆಯಲ್ಲಿ ಪ್ರಭಾವ ಬೀರುತ್ತಾ ಎಂಬ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನಮ್ಮಪಕ್ಷವು ಸಿದ್ದತೆ ಮಾಡಬೇಕು.