೨೩ ಲಕ್ಷ ಸರ್ಕಾರಕ್ಕೆ ವಂಚನೆ ಕೋಲಾರ ತಹಸೀಲ್ದಾರ್ ಕುಮಕ್ಕು ; ಭಾರತೀಯ ಬಹುಜನ ಸೇವಾ ಸಮಿತಿ ಆರೋಪ ಕೋಲಾರ ತಾಲೂಕಿನ ವೇಮಗಲ್ ಹೋಬಳಿ ಗುಡುಗೊಂಡನಹಳ್ಲಿ ಸರ್ವೆ ನಂ. ೧೦ ರಲ್ಲಿ ೮ ಗುಂಟೆ ಜಮೀನು ಕೆ.ಐ.ಎ.ಡಿ.ಬಿಗೆ ಭೂಸ್ವಾಧೀನವಾಗಿದ್ದು, ವಾರಸುದಾರರಲ್ಲದ ಸುಗಟೂರು ಹೋಬಳಿ ಮಟ್ನಹಳ್ಳಿ ಗ್ರಾಮದ ವೆಂಕಟರಾಮಯ್ಯ ಬಿನ್ ಸಂಪಂಗಿರಾಮಯ್ಯ ಎಂಬುವವರಿಗೆ ವೇಮಗಲ್ ಹೋಬಳಿ ಮಡಿವಾಳ ಕಂದಾಯ ವೃತ್ತದ ಗ್ರಾಮಲೆಕ್ಕಾಧಿಕಾರಿ ರೇಖಾ ಹಾಗೂ ರಾಜಸ್ವ ನಿರೀಕ್ಷಕ ಮಂಜುನಾಥ್ ನಕಲಿ ಖಾತೆದಾರನಿಗೆ ಪಟ್ಟ, ಪುಸ್ತಕ, ಕಂದಾಯ ರಸೀದಿ ಹಾಗೂ ಅನುಭವ ದೃಢೀಕರಣ ನೀಡಿ ೨೩ ಲಕ್ಷ ರೂಗಳನ್ನು ಸರ್ಕಾರಕ್ಕೆ ವಂಚನೆ ಮಾಡಿದ್ದು, ಇದಕ್ಕೆ ಕೋಲಾರ ತಹಸೀಲ್ದಾರ್ ಕುಮಕ್ಕು ನೀಡುತ್ತಿದ್ದಾರೆ ಎಂದು ತಾಲೂಕು ಕಚೇರಿ ಮುಂದೆ ಪ್ರತಿಭಟ