ನ.15 ರಂದು ಇತಿಹಾಸ ಪ್ರಸಿದ್ದ ಸೀತಿ ಗ್ರಾಮದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ-ಸೀತಿ ಹೊಸೂರು ಮುರಳಿಗೌಡ ಕೋಲಾರ:- ತಾಲೂಕಿನ ಇತಿಹಾಸ ಪ್ರಸಿದ್ಧ ಸೀತಿ ಗ್ರಾಮದಲ್ಲಿ ನ.15ರ ಶನಿವಾರದಂದು (ನಾಳೆ) ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ ಎಂದು ಸಮಾಜ ಸೇವಕ ಸೀತಿಹೊಸೂರು ಮುರಳಿಗೌಡ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಮಧ್ಯಾಹ್ನ 1:30 ರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರಳಿಗೌಡ ಅಭಿಮಾನಿಗಳ ಬಳಗ, ಎಂಜಿ. ಯುವ ಬ್ರಿಗೇಡ್, ರಾಜ್ಯ ಡಿ.ಕೆ. ರವಿ ಅಭಿಮಾನಿಗಳ ಬಳಗ, ಶ್ರೀವಾರಿ ಫೌಂಡೇಷನ್ ತಂಡದಿಂದ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿದ್ದು, ಸಂಜೆ 4 ಗಂಟೆ ಯಿಂದ 8 ಗಂಟೆಯವರೆಗೆ ನಡೆಯಲಿದೆ ಎಂದರು. ತಿರುಪತಿಯಿಂದ 20 ಮಂದಿ ತಂಡ ಆಗಮಿಸಿ ಕ