ರಾಮಮಂದಿರಕ್ಕೆ ರಾಹುಲ್ ಗಾಂಧಿ ಭೇಟಿಗೆ ಆಕ್ಷೇಪ ಮಾಡಿದ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಹದೇವಪ್ಪ ಅವರು ಇದೊಂದು ಧಾರ್ಮಿಕ ವಿಚಾರ. ಪೆರಿಯಾರ್, ಬಸವಣ್ಣ, ನಾರಾಯಣಗುರು ಎಲ್ಲ ಧರ್ಮದ ವಿರುದ್ಧ, ಜಾತಿ ವಿರುದ್ಧ ಇದ್ದವರು ಧರ್ಮ ಮಾನವನ ಅಭಿವೃದ್ಧಿಗೆ ಇರುವಂತದ್ದು. ಈ ರೀತಿ ಮಾಡುವುದು ಎಷ್ಟು ಸರಿ ಅಂತ ಇದನ್ನ ಮಾಧ್ಯಮಗಳೇ ಹೇಳಬೇಕು ಎಂದರು. ಇನ್ನು ನರೇಗಾ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಇವರು ನರೇಗಾ ರೀಫಿಲ್ ಮಾಡಿದ್ದಾರೆ, ಹೆಸರು ಯಾಕೆ ಚೇಂಜ್ ಮಾಡಿದ್ದಾರೋ ಗೊತ್ತಿಲ್ಲ, ಗಾಂಧಿ ರಾಷ್ಟ್ರ ಪಿತ, ರಕ್ತ ರಹಿತ ಸ್ವಾತಂತ್ರ ತಂದು ಕೊಟ್ಟವರು, ಬುದ್ದ ಹುಟ್ಟಿದ ನಾಡು ಅನ್ನೋಕೆ ಹೆಮ್ಮೆ ನಮಗೆ ಇದೆ,