ಹುಬ್ಬಳ್ಳಿ: ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ (ರಿ) ವತಿಯಿಂದ ಹುಬ್ಬಳ್ಳಿಯ ಪ್ರಧಾನ ಅಂಚೆಕಛೇರಿ ಬಳಿಯ ಸಂವಿಧಾನ ಶಿಲ್ಪಿ ಭಾರತರತ್ನ ಡಾ:ಬಾಬಾಸಾಹೇಬ್ ಭೀಮರಾವ್ ರಾಮಜೀ ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ "ಸಂವಿಧಾನ ದಿನಾಚರಣೆಯನ್ನ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಗುರುನಾಥ ಉಳ್ಳಿಕಾಶಿ ಮಾತನಾಡಿದರು. ಸದರಿ ಸಂಧರ್ಭದಲ್ಲಿ ಗುರುನಾಥ ಉಳ್ಳಿಕಾಶಿ,ಗುರಪ್ಪ ಚಲವಾದಿ,ಮಂಜು ಸ್ವಾಮಿ,ರೇವಣ ಸಿದ್ದಪ್ಪ ದೊಡ್ಡಮನಿ,ದೇವಣ್ಣ ಇಟಗಿ,ಕವಿತಾ ನಾಯ್ಕರ,ಮಂಜುಳಾ ಬೆಣಗಿ,ಬಾಬರ ಖೋಜೆ,ಚೇತನಾ ಲಿಂಗದಾಳ,ರಾಜಪ್ಪ ಕಾಳೆ ಸೇರಿದಂತೆ ಉಪಸ್ಥಿತರಿದ್ದರು.