ಶಿರಸಿ: ಬನವಾಸಿಯ ಮಧುಕೇಶ್ವರನಿಗೆ ವರುಣನಿಂದಲೇ ಅಭಿಷೇಕ : ಸೋರುತ್ತಿರುವ ದೇವಾಲಯಕ್ಕೆ ಟಾರ್ಪಾಲ್ ಹೊದಿಕೆಯ ಅಪಹಾಸ್ಯ !
#localissue
ಶಿರಸಿ : ತಾಲೂಕಿನ ಪ್ರಸಿದ್ಧ ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಉಳಿದ ಕಾಲದಲ್ಲಿ ಅರ್ಚಕರಿಂದ ಜಲಾಭಿಷೇಕ ನಡೆದರೆ, ಮಳೆಗಾಲದಲ್ಲಿ ವರುಣದೇವನಿಂದಲೇ ಜಲಾಭಿಷೇಕ ನಡೆಯುತ್ತದೆ. ಇದು ಪ್ರಾಚ್ಯ ವಸ್ತು ಇಲಾಖೆಯ ನಿಶ್ಕಾಳಜಿಯಿಂದ ಸಾಧ್ಯವಾಗಿದ್ದು, ದೇವಸ್ಥಾನದ ಸೋರುತ್ತಿದ್ದರೂ ಅಗತ್ಯ ಅಭಿವೃದ್ಧಿ ಮಾಡದೇ ಕೇವಲ ಟಾರ್ಪಾಲ್ ಹೊದಿಕೆ ಮಾಡಿ ಕಾಟಾಚಾರಕ್ಕೆ ನೋಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಸೋರಿಕೆ ಕಂಡುಬಂದದಲ್ಲಿ ಕೂಡಲೇ ಸಂಬಂಧಪಟ್ಟ ಆಡಳಿತ ಮಂಡಳಿಯೋ ಅಥವಾ ಮುಜರಾಯಿ ಇಲಾಖೆಯೋ ಅಥವಾ ಸಂಬಂಧಪಟ್ಟ ಇಲಾಖೆ ಅದರತ್ತ ಗಮನಹರಿಸಿ ಸೋರಿಕೆ ತಡೆಯುವಿಕೆಗೆ ಶಾಶ್ವತ ಪರಿಹಾರ ಮಾಡುತ್ತಾರೆ.