ಯಶವಂತಪುರ ಜಂಕ್ಷನ್ ನಲ್ಲಿರುವ ಟ್ರಾಫಿಕ್ ಐಲ್ಯಾಂಡ್ ಅಭಿವೃದ್ಧಿ ಮಾಡಲು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಮೇಕ್ರಿ ವೃತ್ತದಿಂದ ಮಂಜುನಾಥ್ ಮೆಟ್ರೋ ಸ್ಟೇಷನ್ ವರೆಗೆ ದ್ವಿಚಕ್ರ ವಾಹನದ ಮೂಲಕ ವಿವಿಧ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿ, ಯಶವಂತಪುರ ಮೇಲ್ಸೇತುವೆಗೆ ಬಣ್ಣ ಹಚ್ಚುವುದು, ದೀಪಗಳ ಅಳವಡಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸುಂದರೀಕರಣ ಮಾಡಲು ಸೂಚನೆ ನೀಡಿದರು.