ನಾಗಲಾಪುರ ಮಠದಲ್ಲಿ ಕೊನೆಯ ಕಾರ್ತಿಕ ಸೋಮವಾರ ಪ್ರಯುಕ್ತ ಧರ್ಮ ಜಾಗೃತಿ ಸಮಾರಂಭ ಕೋಲಾರ: ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ಕಾಣುವ ಮಾಸವೇ ಕಾರ್ತಿಕ ಮಾಸವೆಂದು ಧಾರ್ಮಿಕವಾಗಿ ನಂಬಿರುವ ನಾವು ಕೊನೆ ಕಾರ್ತಿಕ ಮಾಸದಂದು ಬೆಳಕಿನ ದೀಪ ಹಚ್ಚುವ ಮೂಲಕ ಬಾಳಿನಲ್ಲಿ ಹೊಂಬೆಳಕನ್ನು ಕಾಣುತ್ತೇವೆ ಎಂದು ನಾಗಲಾಪುರ ಮಠದ ಶ್ರೀ ತೇಜೇಷಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ನಾಗಲಾಪುರ ಮಠದಲ್ಲಿ ಕೊನೆಯ ಕಾರ್ತಿಕ ಸೋಮವಾರ ಪ್ರಯುಕ್ತ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ, ಭಕ್ತಾದಿಗಳಿಂದ ಪಾದಪೂಜೆ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ಕಾಲದಿಂದಲೂ ಕಾರ್ತಿಕ ಮಾಸದ ಸಮಯದಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಸಿಕೊಂಡು ಬರಲಾ