ಮಲ್ಲೇಶ್ವರಂನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಹಲವಾರು ಬಾರಿ ಮಾತಾಡ್ತಾ, ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡ್ತಾರೆ. ಅವರ ಸ್ಥಾನಕ್ಕೆ ಅದು ಶೋಭೆ ತರಲ್ಲ. ಇತ್ತೀಚೆಗೆ ಅದೇ ಶಬ್ದ ಬಳಕೆ ಮಾಡ್ತಾರೆ. ಸಿದ್ದರಾಮಯ್ಯ ಅವರು ಹಿರಿಯರು, ಲೋಕಾನುಭವ ಇದ್ದವರು. ಅವರಿಗೆ ಅಮಾವಾಸ್ಯೆ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ಲ. ಅಮಾವಾಸ್ಯೆ ದಿನ ಸೂರ್ಯ ಇರ್ತಾನೆ, ಹುಣ್ಣಿಮೆಯಲ್ಲೂ ಸೂರ್ಯ ಇರ್ತಾನೆ. ಚಂದ್ರ ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಬದಲಾಗೋದು. ಚಂದ್ರನ್ನ ಪೂಜೆ ಮಾಡೋರ ಜೊತೆ ಇದ್ದೂ, ಇದ್ದೂ ನಿಮ್ಮ ತಲೆಯಲ್ಲಿ ಬದಲಾಗಿದೆ.