ನಮ್ಮ ಸಂಸ್ಕೃತಿಯ ಮೂಲವೇ ಜಾನಪದ ಕಲೆಗಳು : ಅಮ್ಮೆರಹಳ್ಳಿಯಲ್ಲಿ ಅಬ್ಬಣಿ ಶಿವಪ್ಪ ಜಾನಪದ ಕಲೆಗಳು ಬಗ್ಗೆ "ನಮ್ಮ ಸಂಸ್ಕೃತಿಯ ಮೂಲವೇ ಜಾನಪದ ಕಲೆಗಳು. ಈ ಕಲೆಗಳು ನಮ್ಮ ನಾಗರಿಕತೆಯ ಪ್ರತೀಕಗಳಾಗಿವೆ. ಗ್ರಾಮೀಣ ಭಾರತದ ಹೃದಯ ಸ್ಪಂದನೆಯೇ ಜಾನಪದ ಕಲೆಗಳು. ನಾಗರಿಕತೆಯ ವೇಗದ ಅಭಿವೃದ್ಧಿಯಲ್ಲಿ ಈ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ, ಇವುಗಳನ್ನು ಸಂರಕ್ಷಿಸುವುದು ಮತ್ತು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ" ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು, ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂ