ಹುಬ್ಬಳ್ಳಿ: ಹಣಕಾಸಿನ ಒತ್ತಡಕ್ಕೆ ತತ್ತರಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಫೈನಾನ್ಸ್ ಸಾಲದ ಒತ್ತಡದಿಂದ ಬೇಸತ್ತಿದ್ದ ಮಂಜುನಾಥ ಕರಮುಡಿ ಎಂಬ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರಗೋಳದ ನಿವಾಸಿ ಮಂಜುನಾಥ್ ಕುಶಮ್ಮನವರ ಹಾಗೂ ಆತನ ಕುಟುಂಬಸ್ಥರು ಸೇರಿದಂತೆ ವ್ಯಕ್ತಿಯ ಮೇಲೆ ಬಡ್ಡಿ ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಹಿಂದೆ ಕೂಡ ಈ ನಾಲ್ವರ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಇದೇ ವಿಚಾರಕ್ಕೆ ಮಂಜುನಾಥ್ ಕುಶಮ್ಮನವರ ಹಾಗೂ ಆತನ