ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಸಭಾಪತಿ ಹೊರಟ್ಟಿಗೆ ಪ್ರದೀಪ್ ಈಶ್ವರ್ ಕೌಂಟರ್ ಕೊಟ್ಟಿದ್ದಾರೆ. ಕೆಲವರು ಆಕಸ್ಮಿಕವಾಗಿ ಗೆಲ್ಲುತ್ತಾರೆ ಎಂದಿದ್ದಾರೆ ಹೊರಟ್ಟಿ ಅವರು, ಸಭಾಪತಿ ಹೊರಟ್ಟಿ ಮೇಲೆ ಗೌರವ ಇದೆ, ಅವರು ಹಿರಿಯರಿದ್ದಾರೆ. ಆಕಸ್ಮಿಕವಾಗಿ ಸಭಾಪತಿ ಆಗಬಹುದು. ಆದರೆ ಶಾಸಕರಾಗುವುದು ಕಷ್ಟ. ವಿಧಾನಪರಿಷತ್ ನಲ್ಲಿ ಗೆದ್ದಿರೋರು ಕೈಎತ್ತಿದರೆ ಸಭಾಪತಿ ಆಯ್ಕೆ ಆಗ್ತಾರೆ. ಆದರೆ ಶಾಸಕರಾಗಿ ಆಯ್ಕೆ ಆಗಲು ಒಂದು ಲಕ್ಷ ಜನ ಮತ ಹಾಕಬೇಕು. ಈ ಹೇಳಿಕೆ ಸಭಾಪತಿಗೆ ಅನ್ವಯಿಸಲ್ಲ, ಸಭಾಪತಿ ಆಯ್ಕೆಗೆ ಅನ್ವಯಿಸುತ್ತೆ ಎಂದರು.