ಕೆಜಿಎಫ್ ವಕೀಲರ ಸಂಘಕ್ಕೆ ಕೆ.ಸಿ.ನಾಗರಾಜ್ ಆಯ್ಕೆ ಬೇತಮಂಗಲ: ಕೆಜಿಎಫ್ ವಕೀಲರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬೇತಮಂಗಲ ಕೆ.ಸಿ.ನಾಗರಾಜ್ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕೆಜಿಎಫ್ ತಾಲ್ಲೂಕು ವಕೀಲರ ಸಂಘದ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬೇತಮಂಗಲ ಕೆ.ಸಿ.ನಾಗರಾಜ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಬೇತಮಂಗಲ ಭಾಗದ ಕೆ.ಸಿ.ನಾಗರಾಜ್ ಅವರು ವಕೀಲರ ಸಂಘದಲ್ಲಿ ಹಲವು ಜವಾಬ್ದಾರಿಗಳನ್ನು ಸಕ್ರಿಯವಾಗಿ ನಿಭಾಯಿಸಿದ್ದಾರೆ, ಅದರಿಂದ ವಕೀಲರ ಮತ್ತೊಮ್ಮೆ ನಂಬಿಕೆ ಇಟ್ಟು ಅತೀ ಹೆಚ್ಚು ಮತಗಳಿಂದ ಉಪ