ಚಾಮರಾಜನಗರ: ತಾಲೂಕಿನ ರಾಮಸಮುದ್ರ ಗ್ರಾಮದ ವೃದ್ದ ರೈತ ಸಿದ್ದಶೆಟ್ಟಿ ಮೇಲೆ ಚಿರತೆಯೊಂದು ದಾಳಿ ನಡೆಸಲು ಮುಂದಾಗಿದ್ದು ಪ್ರಾಣ ರಕ್ಷಣೆಗಾಗಿ ವೃದ್ದ ರೈತ ಚಿರತೆಯನ್ನೆ ಹೊಡೆದು ಹಿಮ್ಮೆಟ್ಟಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ರಾಮಸಮುದ್ರ ನಿವಾಸಿ ವೃದ್ದ ರೈತ ಸಿದ್ದಶೆಟ್ಟಿ ಎಂಬುವವರು ರಾಮಸಮುದ್ರ ದೊಡ್ಡಕೆರೆ ರಸ್ತೆಯಲ್ಲಿ ಜಮೀನಿನಲ್ಲಿ ವಾಸವಿರುತ್ತಾರೆ. ಪ್ರತಿನಿತ್ಯ ಹಸು ಮೇಕೆ ಸಾಕಾಣಿಕೆಯಲ್ಲಿ ತೊಡಗಿದ್ದ ರೈತನ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ನಡೆಸಿದೆ. ಕಣ್ಮುಂದೆ ಮೇಕೆಯನ್ನು ಎಳೆದುಕೊಂಡು ಸಾಗುತ್ತಿದ್ದ ಚಿರತೆ ಕಂಡ ರೈತ ಸಿದ್ದಶೆಟ್ಟಿ ಅಕ್ಕಪಕ್ಕದ ರೈತರನ್ನು ಕೂಗಿಕೊಂಡಿದ್ದಾರೆ. ಈ ವೇಳೆ ಚಿರತೆಯು ವೃದ್ದ ರೈತನ ಮೇಲೆ ದಾಳಿ ನಡೆಸಲು ಮುಂದಾಗುತ್ತಿದ್ದಂತೆ ಆತ ಓಡಾಡಿಸಿದ್ದಾನೆ