ಕೋಗಿಲು ಬಡಾವಣೆ ಅಕ್ರಮ ನಿವಾಸಿಗಳಿಗೆ ಮನೆ ಕೊಡುವ ತೀರ್ಮಾನ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ನಿನ್ನೆ ಸಿಎಂ ಡಿಸಿಎಂ ಸಭೆ ಮಾಡಿದ್ರು ಮುಂದಿನ ಪರಿಹಾರ ಕ್ರಮಗಳ ಬಗ್ಗೆ ತೀರ್ಮಾನ ಮಾಡಿದ್ದಾರೆ. ಯಾರು ಮನೆ ಕಳೆದುಕೊಂಡಿದ್ದರು ಅವರಿಗೆ ಮನೆಯನ್ನು ಕೊಡುವ ತೀರ್ಮಾನ ಮಾಡಿದ್ದಾರೆ. ಬಹುಶಃ ಅಲ್ಲಿಗೆ ಅದು ಆ ಸಮಸ್ಯೆ ಬಗ್ಗೆ ಹರಿಯಿತು ಅಂದುಕೊಂಡಿದ್ದೇನೆ. ಎಲ್ಲಾ ಸಾಧಕ ಬಾದಕಗಳನ್ನು ನೋಡಿ ಸರ್ಕಾರ ತೀರ್ಮಾನ ಮಾಡಿದೆ. ಸಿಎಂ ಡಿಸಿಎಂ ತೀರ್ಮಾನ ಮಾಡಿರೋದು. ಅವರು ಎಲ್ಲ ಪರಿಶೀಲನೆ ಮಾಡಿಯೇ ಮಾಡಿದ್ದಾರೆ. ಬೇರೆ ಬೇರೆಯವರ ರಾಜಕೀಯ ಹೇಳಿಕೆಗಳಿಗೆ ವಿರೋಧ ಪಕ್ಷದವರು ಮಾತನಾಡಲು ಇದು ಒಂದು ಭಾಗ ಆಗಿತ್ತು.