ಮಳವಳ್ಳಿ : ಡಿ 15 ರಿಂದ 22 ರವರೆಗೆ ಮಳವಳ್ಳಿ ಪಟ್ಟಣದಲ್ಲಿ ಸುತ್ತೂರು ವೀರ ಸಿಂಹಾಸನ ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತೋತ್ಸವ ಬಹು ಅದ್ದೂರಿಯಿಂದ ಜರುಗಲಿದ್ದು ಇದಕ್ಕಾಗಿ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿದೆ. ಈ ಜಯಂತೋತ್ಸವದ ಉದ್ಘಾಟನೆ ಗಾಗಿ ಮಳವಳ್ಳಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರಪತಿ ಗಳು ಆಗಮಿಸುತ್ತಿದ್ದು ಈ ಹಿನ್ನೆಲೆ ಯಲ್ಲಿ ಇಡೀ ಜಿಲ್ಲಾಡಳಿತ ಸಮಾ ರಂಭದ ಪೂರ್ವ ತಯಾರಿಗಾಗಿ ಟೊಂಕಕಟ್ಟಿ ಶ್ರಮಿಸುತ್ತಿದೆ. ಜಯಂತೋತ್ಸವ ಸಮಾರಂಭ ನಡೆಯುವ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನ ದಲ್ಲಿ 33 ಎಕರೆ ಪೂರ್ತಿ ಬೃಹತ್ ವೇದಿಕೆ ಸಿದ್ದವಾಗುತ್ತಿದೆ.