ಮಳವಳ್ಳಿ: ಭತ್ತ, ತೆಂಗು, ಅವರೆ, ಬೆಳೆ ತುಳಿದು ನಾಶ ಪಡಿಸಿ ರುವ ಕಾಡಾನೆಗಳು, ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
ಮಳವಳ್ಳಿ : ಬೆಳೆದು ನಿಂತಿದ್ದ ಭತ್ತ ತೆಂಗು, ಅವರೆ ಬೆಳೆಯನ್ನು ಕಾಡಾನೆಗಳು ತುಳಿದು ನಾಶಪಡಿಸಿರುವ ಘಟನೆ ಮಳ ವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ರಸ್ತೆಯಲ್ಲಿ ರುವ ಬ್ಯಾಡರಹಳ್ಳಿ ಗ್ರಾಮದ ಬಳಿ ಜರುಗಿದೆ. ಈ ಗ್ರಾಮದ ಚಂದ್ರಮ್ಮ ಅವರಿಗೆ ಸೇರಿದ ಎರಡು ಎಕರೆ ಜಮೀನಿನ ಮೇಲೆ ಮಂಗಳವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ದಾಳಿ ಮಾಡಿರುವ ಕಾಡಾನೆಗಳು ಜಮೀನಿನಲ್ಲಿ ಬೆಳೆದು ನಿಂತಿದ್ದ ಭತ್ತದ ಬೆಳೆ ಜೊತೆಗೆ ತೆಂಗು ಅವರೆ ಬೆಳೆಯನ್ನು ತುಳಿದು ನಾಶಪಡಿಸಿವೆ ಎಂದು ವರದಿ ಯಾಗಿದೆ. ಈ ಕುರಿತು ಮಂಗಳವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮಾಹಿತಿ ನೀಡಿದ ಚಂದ್ರಮ್ಮ ನಾವು ಕಡುಬಡವರು ಬ್ಯಾಂಕಿನಲ್ಲಿ ಸಾಲ ಮಾಡಿ ನಮ್ಮ ಜಮೀನಿನಲ್ಲಿ ಭತ್ತ ತೆಂಗು ಬೆಳೆದಿದ್ದೆವು, ರಾತ್ರಿ ಕಾಡಾನೆಗಳು ದಾಳಿ ನಾಶ ಮಾಡಿವೆ ಎಂದರು.