ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಇಲ್ಲೇ ಗೊಂದಲ ಶುರು ಆಗಿರೋದು, ದೆಹಲಿಯಲ್ಲಿ ಅಲ್ಲ ಅಂದಿದ್ದಾರೆ. ಅದರರ್ಥ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಅನ್ನೋದು. ಖರ್ಗೆಯವರು ನೇರವಾಗಿ ಸಿದ್ದರಾಮಯ್ಯ ಅವರೇ ಮುಂದುವರೀತಾರೆ ಅಂತ ಹೇಳಬೇಕಿತ್ತು. ಬಹುಶ; ಅಷ್ಟು ಧೈರ್ಯ ಹೈಕಮಾಂಡ್ ಗೆ ಇಲ್ಲ. ಎಐಸಿಸಿ ಅಧ್ಯಕ್ಷರು ಮಾತಾಡುವ ಧೈರ್ಯ ಕಳೆದುಕೊಂಡಿದ್ದಾರೆ. ಖರ್ಗೆಯವರ ಹೇಳಿಕೆಯಿಂದ ಗೊಂದಲ ಮತ್ತಷ್ಟು ಹೆಚ್ಚಾಗಿದೆ. ಸರ್ಕಾರದಲ್ಲಿ ಲೂಟಿ ಹೆಚ್ಚಾಗಿದೆ, ಮಂತ್ರಿಗಳು ಜಿಲ್ಲಾ ಪ್ರವಾಸಕ್ಕೆ ಮುಂದಾಗ್ತಿಲ್ಲ ಎಂದರು.