ತಾಲ್ಲೂಕಿನ ಎಲ್ಲಾ ಪಂಚಾಯಿತಿಯ ಅಧಿಕಾರಿಗಳ ಮೇಲೂ ಸುಮೋಟೋ ದಾಖಲು ಶ್ರೀನಿವಾಸಪುರ ತಾಲ್ಲೂಕಿನ ಇಪ್ಪತೈದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೂ ಸುಮೋಟೋ ದಾಖಲಿಸುತ್ತೇನೆ ಎಂದು ರಾಜ್ಯ ಉಪ ಲೋಕಾಯುಕ್ತರಾದ ಬಿ ವೀರಪ್ಪ ರವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಶ್ರೀನಿವಾಸಪುರ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳು, ವಸತಿ ನಿಲಯಗಳು, ಶಾಲೆಗಳನ್ನು ಒಳಗೊಂಡಂತೆ ಸುಮಾರು 12 ಸ್ಥಳಗಳಿಗೆ ಭೇಟಿ ನೀಡಿದ ರಾಜ್ಯ ಉಪ ಲೋಕಾಯುಕ್ತರ ತಂಡ, ಭ್ರಷ್ಟಾಚಾರ ನಿರ್ಮೂಲಿಸುವ ನಿಟ್ಟಿನಲ್ಲಿ ಸಮರ್ಪಕ ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮಾಡಿದರು. ಬಡವರಿಗೆ ಸಿಗಬೇಕಾದ