ಸಿಎಂ ಕುರ್ಚಿಗೆ ಡಿಕೆಶಿ ಫೈಟ್ ನಡೆಸಿರುವ ಬೆನ್ನಲ್ಲೇ ಸಚೊವ ಸತೀಶ್ ಜಾರಕಿಹೊಳಿ ಅವರು ಅಲರ್ಟ್ ಆಗಿದ್ದು, ಡಿಸಿಎಂ ಡಿಕೆಶಿ ಆಪ್ತ ಶಾಸಕರ ಜೊತೆ ಶೇಷಾದ್ರಿಪುರಂ ರಸ್ತೆ ಬಳಿಯ ಖಾಸಗಿ ಹೋಟೆಲ್ನಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸತೀಶ್ ಜಾರಕಿಹೊಳಿ ಮೀಟಿಂಗ್ ನಡೆಸಿದ್ದಾರೆ. ಲಂಚ್ ಹೆಸರಿನಲ್ಲಿ ಸಭೆ ನಡೆಸಿರುವ ಸತೀಶ್ ಜಾರಕಿಹೊಳಿ ಅವರು, ಶಾಸಕ ಗಣೇಶ್,ಕಿತ್ತೂರು ಶಾಸಕ ಬಾಬಾಸಾಬ್ ಪಾಟೀಲ್, ಬೆಳಗಾವಿಯ ಅಸಿಫ್ ಪಠಾಣ್,ಸವದತ್ತಿಯ ವಿಶ್ವಾಸ್ ವೈದ್ಯ, ರಾಣೆಬೆನ್ನೂರಿನ ಪ್ರಕಾಶ್ ಕೋಳಿವಾಡ, ಪಾವಗಡದ ವೆಂಕಟೇಶ್ ಜೊತೆ ಮೀಟಿಂಗ್ ಮಾಡಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆ ಹಿನ್ನೆಲೆ ಮೀಟಿಂಗ್ ಮಾಡಿದ್ದು, ಈ ಸಭೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.