ಆಧುನಿಕತೆ, ತಂತ್ರಜ್ಞಾನದ ನಡುವೆ ಜಾತ್ರೆ, ಊರಹಬ್ಬಗಳು ಕಳೆಗುಂದುತ್ತಿವೆ ಉಪ್ಪಾರಳ್ಳಿಯಲ್ಲಿ ಧನಗಳ ಜಾತ್ರೆ : ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ ಬೇಸರಹೊಸಕೋಟೆ ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಆಧುನಿಕತೆಯ ಪೆಡಂಭೂತ ಸಂಸ್ಕೃತಿ ಪರಂಪರೆ ಹಾಗೂ ಊರ ಹಬ್ಬ ಜಾತ್ರೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಜಾತ್ರೆಗಳು ಕಳೆಗುಂದುತ್ತಿವೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿಎನ್.ಗೋಪಾಲಗೌಡ ತಿಳಿಸಿದರು.