ಗುಳೇದಗುಡ್ಡ: ಚಿಕನ್ ಗುನ್ಯಾ, ಡೆಂಘೀ ಹರಡದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಿ: ಕೋಟೆಕಲ್ಲದಲ್ಲಿ ಶಿಕ್ಷಕಿ ಅಕ್ಕಮ್ಮ ಬಳಿಗೇರಿ
ಗುಳೇದಗುಡ್ಡ : ಆರೋಗ್ಯ ಪ್ರತಿಯೊಬ್ಬರ ಆಸ್ತಿ ಆಗಬೇಕು. ಮನೆಗಳ ಸುತ್ತಲೂ ನೀರು ನಿಲ್ಲದಂತೆ ಜಾಗೃತಿ ವಹಿಸಿದಾಗ ಮಾತ್ರ ಡೆಂಗ್ಯೂ ಚಿಕನ್ ಗುನ್ಯಾದಂತಹ ಕಾಯಿಲೆಗಳು ಹರಡುವುದಿಲ್ಲ ಎಂದು ಅಕ್ಕಮ್ಮ ಬಳಿಗೆರಿ ಹೇಳಿದರು. ಗುಳೇದಗುಡ್ಡ ತಾಲೂಕಿನ ಕೋಟೆಕಲ್ಲ ಗ್ರಾಮದ ಸರಕಾರಿ ಆರ್ ಎಂ ಎಸ್ ಎ ಪ್ರೌಢಶಾಲೆಯಲ್ಲಿ ಕೀಟಜನ್ಯ ರೋಗಗಳು ಹಾಗೂ ಮುಂಜಾಗ್ರತಾ ಕ್ರಮಗಳು ಕುರಿತ ಮಕ್ಕಳಿಗೆ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಭಾಷಣ ಸ್ಪರ್ಧಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು