ಗೃಹ ಸಚಿವರ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯ..! ವಿಧಾನಸೌದದಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದ ಕಾರ್ಯಕ್ರಮದಲ್ಲೆ ಕನ್ನಡವನ್ನ ನಿರ್ಲಕ್ಷ್ಯ ಮಾಡಲಾಗಿದ್ದು, ನವೆಂಬರ್ ಮುಗೀತಿದ್ದಂತೆ ಕನ್ನಡ ಮರೆತರಾ..? ಎಂಬ ಚರ್ಚೆ ಶುರು ಆಗಿದೆ. ಮಾದಕ ವಸ್ತು ಜಾಗೃತಿಗಾಗಿ ವಿಂಟೇಜ್ ಕಾರು ರ್ಯಾಲಿ ಆಯೋಜನೆ ಮಾಡಲಾಗಿದ್ದು, ಪೊಲೀಸ್ ಇಲಾಖೆ ಹಾಗೂ ಖಾಸಗಿ ಕಂಪನಿ ಸಹಯೋಗತ್ವದಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ವಿಧಾನಸೌಧದ ಮೆಟ್ಟಿಲು ಮೇಲೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಡಿಜಿಐಜಿಪಿ ಡಾ. ಸಲೀಂ, ಕಮಿಷನರ್ ಸೀಮಾಂತ್ ಕುಮಾರ್ ಭಾಗಿಯಾಗಿದ್ದು, ಆದ್ರೆ ಇಡೀ ಕಾರ್ಯಕ್ರಮದಲ್ಲಿ ಕನ್ನಡ ಬಳಕೆಯೇ ಇಲ್ಲದಂತಾಗಿದೆ. ಸದ್ಯ ಕಾರ್ಯಕ್ರಮದಲ್ಲಿ ಕನ್ನಡ ಮರೆತರ ಸರ್ಕಾರ