50 ರೂ ಸಕ್ಕರೆ ಕಾರ್ಖಾನೆಯವರು ಕೊಡಲು ಹಿಂದೇಟು ವಿಚಾರಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಎಲ್ಲರಿಗೆ ಸರ್ಕಾರ ಸಹಾಯ ಮಾಡಿದೆ. ಕೆಲವರು ಒಪ್ಪಿದ್ದಾರೆ, ಕೆಲವರು ಒಪ್ಪಿಲ್ಲ. ಕೆಲವರು ಲಾಸ್ ಆಗ್ತಿದೆ ಕೊಡಲ್ಲ ಅಂದಿದ್ದಾರೆ. ಕೆಲವರು ಕೊಡ್ತೇವೆ ಅಂತ ಹೇಳಿದ್ದಾರೆ. ಕೆಲವರು ವಿರೋಧ ಮಾಡಿಲ್ಲ, ಕೆಲವರು ವಿರೋಧ ಮಾಡಿದ್ದಾರೆ. ಸರ್ಕಾರದ ಡಿಶಿಷನ್ ಕೊಡಲೇ ಬೇಕು. ಇನ್ನು ಕಬ್ಬು ಅರೆಯಬೇಕು, ಅದೆಲ್ಲ ಆದಮೇಲೆ ನೊಡೋಣ ಎಂದರು.