ದಾಂಡೇಲಿ: ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆ (ರಿ.) ಉ.ಕ. ಮತ್ತು ಸಾಹಿತ್ಯ ಸಂಚಲನ ಶಿರಸಿ (ಉ.ಕ.) ಇವರ ಸಹಯೋಗದಲ್ಲಿ ನಗರದ ಮಾಸ್ಕೇರಿ ಸಾಹಿತ್ಯ ಭವನದಲ್ಲಿ ಮಂಗಳವಾರ ಸಂಜೆ 5.30 ಗಂಟೆ ಸುಮಾರಿಗೆ ಜನತಾ ವಿದ್ಯಾಲಯ ಪಿಯು ಕಾಲೇಜಿನ ಉಪನ್ಯಾಸಕಿ ನಿರುಪಮಾ ನಾಯಕರಿಗೆ ಮಾಸ್ಕೇರಿ ಅವ್ವನ ಕಾವ್ಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯ್ತು. ಖ್ಯಾತ ವೈದ್ಯ ಡಾ. ಮೋಹನ ಪಾಟೀಲರು ನಿರುಪಮಾ ನಾಯಕರಿಗೆ ಮಾಸ್ಕೇರಿ ಅವ್ವನ ಕಾವ್ಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ ಪ್ರವರ್ತಕರು ಹಾಗೂ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವೀಂದ್ರ ಲಕ್ಷ್ಮೀಶ್ವರ, ಬಿಎಡ್ ಕಾಲೇಜಿನ ಉಪನ್ಯಾಸಕ ನಾಗೇಶ್ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.