72ನೇ ಅಖಿಲ ಭಾರತ ಸಹಕಾರ ಸಪ್ತಾಹ 2025 ವಿಚಾರವಾಗಿ ರೇಸ್ ಕೋರ್ಸ್ ಬಳಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ ಅವರು, ಭಾರತ ದೇಶದ ಎಲ್ಲ ಕಡೆ ಅಖಿಲ ಭಾರತ ಸಹಕಾರ ಅಂಗವಾಗಿ, ಕರ್ನಾಟಕ ರಾಜ್ಯದಲ್ಲಿಯೂ ಕೂಡ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಈ ಬಾರಿಯ ವಿಶೇಷತೆ ಪ್ರತಿ ಬಾರಿಯೂ ಕೂಡ ಇರುತ್ತೆ. ಆರ್ಥಿಕ ಚಟುವಟಿಕೆಯಲ್ಲಿ ಸದಸ್ಯರ ಪಾಲು ಸಹಕಾರ ಸಂಸ್ಥೆಗಳ ಸಹಕಾರ ಇರಲಿದೆ. ಏಳು ಸಹಕಾರ ಸಂಘದ ತತ್ವಗಳು ಒಳಗೊಂಡತೆ. ಸಹಕಾರ ಸಪ್ತಾಹ ಆರಂಭವಾಗುತ್ತಿದೆ. ಇದನ್ನ ಸಿಎಂ ಅವರೇ ಚಾಲನೆ ನೀಡ್ತಾರೆ ಎಂದರು.