ಚಿನ್ನದ ಪದಕ ಪಡೆದು ಜಿಲ್ಲೆ ಹಾಗೂ ರಾಜ್ಯಕ್ಕೆ ಗೌರವ ತಂದುಕೊಟ್ಟ ಕರಾಟೆ ಪಟುಗಳು ಕೋಲಾರ : ಆಂಧ್ರಪ್ರದೇಶದ ರಾಜ್ಯದ ಗುಂಟೂರು ಜಿಲ್ಲೆಯ ಮಂಗಳಗಿರಿ ನಗರದಲ್ಲಿ ನಡೆದ ಅಂತರ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೋಲಾರ ಜಿಲ್ಲೆಯ ಹೆಸರಾಂತ ರಾಮು ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಟೇಕಲ್ ಹಾಗೂ ಶ್ರೀನಿವಾಸಪುರ ಶಾಖೆಯ ವಿದ್ಯಾರ್ಥಿಗಳು ಭಾಗವಹಿಸಿ, ಕಟಾ ವಿಭಾಗದಲ್ಲಿ ಮಿತ್ರ, ಅಕ್ಷಯ ಹಾಗೂ ವೈಶಾಲಿ ಚಿನ್ನದ ಪದಕ, ನಳಿನಿ ಬೆಳ್ಳಿ ಪದಕ, ಹಾಗೂ ವೈಷ್ಣವಿ ಕಂಚಿನ ಪದಕ, ಕುಮತೆ ವಿಭಾಗದಲ್ಲಿ ದುಶಾಂತ್ ಗೌಡ ಚಿನ್ನದ ಪದಕ ಹಾಗೂ ಅಮರ ಗೌಡ ಬೆಳ್ಳಿ ಪದಕ, ವಿಶೇಷವಾಗಿ ನಾಲ್ಕು ವರ್ಷದ ಸಾನ್ವಿತ್ ಕಟ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆ ಹಾಗೂ ರಾಜ್ಯಕ್ಕೆ ಗೌರವ ತಂದುಕೊಟ್ಟಿದ್ದಾರೆ.