ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಶ್ರೀಕಾಳಿಕಾಂಭ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ಮತ್ತು ಭಾವಗೀತೆ ಸ್ಪರ್ಧ ಕಾರ್ಯಕ್ರಮದಲ್ಲಿ ಶಾಸಕರಾದ ಮಧುಜಿಮಾದೇಗೌಡ ಮತ್ತು ಕೆ.ವಿವೇಕಾನಂದ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಅಭಿನಂದನೆ ಸ್ವೀಕರಿಸಿ ಶಾಸಕ ಮಧುಜಿಮಾದೇಗೌಡ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಗಳು ಅಭಿವೃದ್ದಿಗೊಂಡಾಗ ಮಾತ್ರ ಕೈಗೆಟುಕುವ ದರದಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು. ಭಾರತೀ ವಿದ್ಯಾಸಂಸ್ಥೆ ಮತ್ತು ಕಾಳಿಕಾಂಭ ವಿದ್ಯಾಸಂಸ್ಥೆಗಳು 1962 ರಲ್ಲಿ ಒಟ್ಟಿಗೆ ಪ್ರಾರಂಭಗೊಂಡವು. ಇದರ ಜೊತೆಗೆ ಮಳವಳ್ಳಿಯ ಶಾಂತಿ ವಿದ್ಯಾಸಂಸ್ಥೆ, ಮದ್ದೂರು ಎಚ್.ಕೆ.ವೀರಣ್ಣಗೌಡ ವಿದ್ಯಾಸಂಸ್ಥೆಗಳು ಕೂಡ ಒಟ್ಟಿಗೆ ಪ್ರಾರಂಭ