ಬೆಂಗಳೂರು ಉತ್ತರ: ಸ್ಥಾನ ಉಳಿಸಿಕೊಳ್ಳಲು ಒಬ್ಬರು, ಸ್ಥಾನ ಪಡೆಯಲು ಒಬ್ಬರು, ನಗರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಆರ್.ಅಶೋಕ್ ಟೀಕೆ
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ನವೆಂಬರ್ ನಲ್ಲಿ ಅಧಿಕಾರ ಹಸ್ತಾಂತರ ಇದೆ ಅಂತ ನಾನು ಪದೇ ಪದೇ ಹೇಳ್ತಿದ್ದೆ. ಇಲ್ಲಾಂದ್ರೆ ದೆಹಲಿಯಲ್ಲಿ ಹೋಗಿ ಇವರೆಲ್ಲ ಕೂರುವ ಪರಿಸ್ಥಿತಿ ಏಕೆ ಬಂತು? ಸರ್ಕಾರ ರೈತರ ಕಷ್ಟ ಕೇಳಲ್ಲ, ಕಬ್ಬು ಬೆಳಗಾರರ ಸಮಸ್ಯೆ ಕೇಳಲ್ಲ, ಕೃಷ್ಣಮೃಗಗಳು ಸತ್ತಿವೆ. ಇವೆಲ್ಲ ಬಿಟ್ಟು ದೆಹಲಿಯಲ್ಲಿದ್ದಾರೆ ಅಂದ್ರೆ ದೆಹಲಿಯಲ್ಲಿ ಅಂಥ ಘನಂದಾರಿ ಕೆಲಸ ಏನಿದೆ? ಕರ್ನಾಟಕದಲ್ಲಿ ಸಿಎಂ ಕುರ್ಚಿಗೆ ಮ್ಯೂಸಿಕಲ್ ಚೇರ್ ಆಟ ನಡೀತಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ತಮ್ಮ ಸ್ಥಾನ ಉಳಿಸಿಕೊಳ್ಳಲು ಭೇಟಿ ಆಗ್ತಿದ್ದಾರೆ. ಹಿರಿಯ ಆಕಾಂಕ್ಷಿ ಶಾಸಕರೂ ಭೇಟಿ ಆಗ್ತಿದ್ದಾರೆ,