ಮಳವಳ್ಳಿ : ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರ ವಿರುದ್ಧ ತಾನು ನೀಡಿರುವ ಹೇಳಿಕೆಯನ್ನು ವಾಪಸ್ ಪಡೆದಿರುವುದರ ಜೊತೆಗೆ ಅಗತ್ಯ ಬಿದ್ದಲ್ಲಿ ಕ್ಷಮೆ ಕೇಳಲು ಸಹ ಸಿದ್ದ ಎಂದು ನಂಜನಗೂಡಿನ ಶ್ರೀಕಂಠ ಸ್ಪಷ್ಟ ಪಡಿಸಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ಮಂಗಳ ವಾರ ಸಾಯಂಕಾಲ 4.30 ರ ಸಮ ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ಬಾರಿ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನನಗೆ ಯಾವುದೇ ನೋಟೀಸ್ ಅಥವಾ ಮಾಹಿತಿನೀಡದೆ ಏಕಾಏಕಿ ಪಕ್ಷದಿಂದ ವಜಾ ಮಾಡಿ ರುವುದಾಗಿ ಪ್ರಕಟಿಸಿದ ಅಧ್ಯಕ್ಷರ ಕ್ರಮದಿಂದ ಮನನೊಂದು ಹೇಳಿಕೆ ನೀಡಿದ್ದಾಗಿ ಸ್ಪಷ್ಟನೆ.