ಮದ್ದೂರು: ದೇಶದ ಅಧಿಕಾರ ಸನ್ಯಾಸಿ ಕೈಲಿ ಎಂಬ ಬ್ರಹ್ಮಾಂಡ ಗುರೂಜಿ ಭವಿಷ್ಯಕ್ಕೆ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ಕೆಂಡಾಮಂಡಲ
Maddur, Mandya | Oct 12, 2025 ಮದ್ದೂರು : ಮುಂದೆ ದೇಶದ ಅಧಿಕಾರ ಸನ್ಯಾಸಿ ಕೈಲಿ ಎಂಬ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿ ವಿರುದ್ಧ ಶಾಸಕ ಕದಲೂರು ಉದಯ್ ಕೆಂಡಾಮಂಡಲವಾಗಿ ದ್ದಾರೆ. ಮದ್ದೂರಿನಲ್ಲಿ ಭಾನುವಾರ ಮಧ್ಯಾಹ್ನ 4ಗಂಟೆ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆತ ಯಾರ್ರೀ ಸರ್ಕಾರದ ಭವಿಷ್ಯ ಹೇಳೋಕೆ ಆ ದಂಡಪಿಂಡದ ವಿಚಾರ ಬೇಡ, ಸರ್ಕಾರದ ಭವಿಷ್ಯನ ಈ ದೇಶದ ಜನರು ನಿರ್ಧರಿಸ್ತಾರೆ ಹೊರತು ತಾನೇ ಪುಕ್ಸಟೆ ರೋಲ್ ಕಾಲ್ ಮಾಡ್ಕೊಂಡು, ಜನರಿಗೆ ಮಂಕುಬೂದಿ ಎರಚಿಕೊಂಡು, ಚಿಲ್ರೆ ಕಾಸಿಲ್ಲಿ ಬದುಕ್ತಿರುವವನು, ಆತ ಏನು ಸರ್ಕಾರದ ಭವಿಷ್ಯ ಹೇಳ್ತಾನೆ ಜನ ನಿರ್ಧಾರ ಮಾಡ್ತಾರೆ ಎಂದು ಬ್ರಹ್ಮಾಂಡ ಗುರೂಜಿ ವಿರುದ್ಧ ವಿರುದ್ಧ ಹರಿಹಾಯ್ದರು.