ತೀರ್ಥಹಳ್ಳಿ: ತಾಲೂಕಿನ ಕಮ್ಮರಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗವನ್ನು ನಡೆಸಲಾಯಿತು
ತಾಲೂಕಿನ ಕಮ್ಮರಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗವನ್ನು ನಡೆಸಲಾಯಿತು ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿಹಾಗೂ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಅತಿರುದ್ರ ಮಹಾಯಾಗವನ್ನು ಗುರುವಾರ ಸಂಜೆ 4 ಗಂಟೆಗೆ ನಡೆಸಲಾಯಿತು. ಅತಿರುದ್ರ ಮಹಾಯಾಗದ ಪೂರ್ಣಹುತಿಯಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಕಮ್ಮರಡಿ ಶ್ರೀಕಾಂತ ಭಟ್ಟರ ನೇತೃತ್ವದಲ್ಲಿ ಈ ಯಾಗವನ್ನು ಮಾಡಲಾಗಿದೆ. ಸಮಸ್ತ ಲೋಕಕ್ಕೆ ಒಳಿತಗ ಜಗತ್ತು ತಿರುಗಿ ನೋಡುವಂತೆ ದೇಶವನ್ನು ಕಟ್ಟಿದ ನರೇಂದ್ರ ಮೋದಿ ಗೆಲುವಿಗಾಗಿ ಪ್ರಾರ್ಥಿಸಿ ಮಹಾರುದ್ರಯಾಗ ನಡೆಸಲಾಯಿತು.