ನಗರಸಭಾ ಅಧಿಕಾರಿಗಳಿಂದ ರಾತ್ರಿ ನಗರ ಸಂಚಾರ ; ನಿರಾಶ್ರಿತರ ಪರಿಶೀಲನೆ ಕೋಲಾರ : ಕೋಲಾರ ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್. ರವಿ ಅವರ ಆದೇಶದಂತೆ ಬುಧವಾರ ರಂದು ರಾತ್ರಿ 10 ಗಂಟೆಯಲ್ಲಿ ನಗರಸಭೆಯ ನಲ್ಮ್ ವಿಭಾಗದ ವ್ಯವಸ್ಥಾಪಕರಾದ ರಾಜೇಶ್ವರಿ, ಖುತೇಜಾ, ಆರೋಗ್ಯ ನಿರೀಕ್ಷಕರಾದ ಸಂಜಯ್ ಹಾಗೂ ಸಮುದಾಯ ಪ್ರೇರಕರಾದ ಮುಸ್ತಫಾ ಪಾಷಾ ಅವರುಗಳೊಂದಿಗೆ ನಗರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ರಾತ್ರಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಎಂ.ಜಿ. ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳು, ಸಾರ್ವಜನಿಕ ಸ್ಥಳಗಳು ಹಾಗೂ