ಟನಲ್ ರೋಡ್ ನಿರ್ಮಾಣಕ್ಕೆ ಸಂಸದ ತೇಜಸ್ವಿ ಸೂರ್ಯ ವಿರೋಧ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಸಂಜೆ ಮಲ್ಲೇಶ್ವರಂ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ವೈಯಕ್ತಿಕ ಟೀಕೆ ಮಾಡುವುದಿಲ್ಲ. ಡಿಕೆ ಶಿವಕುಮಾರ್ ಹಿರಿಯ ರಾಜಕಾರಣಿ ಇದ್ದಾರೆ. ನಾನು 30 ನಿಮಿಷ ಸಮಯ ಕೇಳಿದ್ದೇನೆ. ಟನಲ್ ರೋಡ್ ಬೆಂಗಳೂರಿಗೆ ಯಾಕೆ ಒಳ್ಳೆಯದಲ್ಲ ಎಂಬುದರ ಬಗ್ಗೆ ಪರಿಸರವಾದಿಗಳು ನಾವು ಮನವರಿಕೆ ಮಾಡಿಕೊಡ್ತೇವೆ. ಮಾಡೇ ಮಾಡ್ತಿವಿ ಅಂತ ಜಿದ್ದಿಗೆ ಬೀಳೋದು ತಪ್ಪು. ತೇಜಸ್ವಿಗೆ ಟ್ರಾಫಿಕ್ ಕುರಿತು ಏನು ಗೊತ್ತಿದೆ ಎಂದಿದ್ದಾರೆ. ನಾವೇ ಸಲಹೆಗಳನ್ನ ಕೊಡ್ತೇವೆ ಎಂದರು.