ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಅವರ 44 ನೇ ದಿನಕ್ಕೊಂದು ವಾರ್ಡ್ ನಡಿಗೆ ಕಾರ್ಯಕ್ರಮ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬಸವೇಶ್ವರನಗರ ವಾರ್ಡಿನಲ್ಲಿ ನಡೆಯಿತು. ಬಸವೇಶ್ವರನಗರದ "ಜ್ಯೋತಿಸ್" ಬಳಿಯಿಂದ ಪ್ರಾರಂಭವಾದ ಭಾನುವಾರದ ನಡಿಗೆ, ಬಸವೇಶ್ವರನಗರದ ಎರಡನೇ ಅಡ್ಡರಸ್ತೆ, ಎರಡನೇ ಮುಖ್ಯ ರಸ್ತೆ, , ಎರಡನೇ ಬಿ ಮತ್ತು ಸಿ ಮುಖ್ಯ ರಸ್ತೆ, ಮೂರನೇ ಮುಖ್ಯರಸ್ತೆ, ಐದನೇ ಮುಖ್ಯರಸ್ತೆ, ನಾಲ್ಕನೇ ಸೀ ಮುಖ್ಯರಸ್ತೆ ಹಾಗೂ ಎರಡನೇ E ಅಡ್ಡ ರಸ್ತೆಗಳಲ್ಲಿ ನಡೆದಿದ್ದು, ಬಹಳ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರನ್ನು ಅವರ ಮನೆ ಬಾಗಿಲ ಬಳಿಯಲ್ಲಿಯೇ ಭೇಟಿ ಮಾಡಿದ ಶಾಸಕ ಸುರೇಶ್ ಕುಮಾರ್ ಅವರು ನಾಗರೀಕರ ಅಹವಾಲುಗಳನ್ನು ಸ್ವೀಕರಿಸಿದರು.