ಸಿಎಂ- ಡಿಸಿಎಂ ಸಚಿವರೆಲ್ಲಾ ದೆಹಲಿ ಪ್ರವಾಸ ವಿಚಾರಕ್ಕೆ ಸಂಬಂಧಿಸಿ ಮಲ್ಲೇಶ್ವರಂನಲ್ಲಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಅವರು, ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ. ರಾಜ್ಯ ದೇಶದ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದಿರುವಂತಹ ಮೊಂಡುತನದ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ. ಈ ಸರ್ಕಾರಕ್ಕೆ ತಲೆನೂ ಇಲ್ಲ. ಬುಡನೂ ಇಲ್ಲ. ಗಾಂಭೀರ್ಯತೆ ಅನ್ನೋದು ಮೊದಲೇ ಗೊತ್ತಿಲ್ಲ. ಇತಂಹ ಜನರನ್ನ ಕಟ್ಟುಕೊಂಡು ಎನ್ ಮಾಡೋಕೆ ಆಗಲ್ಲ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಇತಂಹ ಕೆಟ್ಟ ವ್ಯವಸ್ಥೆಯ ಸಿದ್ದರಾಮಯ್ಯರ ಕಾಲದಲ್ಲಿ ಬರುತ್ತೆ ಅಂತಾ ನಿರೀಕ್ಷೆ ಮಾಡಿರಲಿಲ್ಲ ಇದು ಹೇಸಿಗೆ ಕೆಲಸ. ಅದ್ಕೆ ಬಿಹಾರದ ಜನರು ಮೋದಿ ಅಭ್ಯುದಯದಲ್ಲಿ ಮತ ಹಾಕಿದ್ದಾರೆ ಎಂದರು.