ದಳಸನೂರು ಹಾಗೂ ಬೈರಾಗನಹಳ್ಳಿ ಆರೋಗ್ಯ ಕೇಂದ್ರಕ್ಕೆ ಸಮಯಕ್ಕೆ ಬಾರದ ವೈದ್ಯರ ವಿರುದ್ದ ಸಾರ್ವಜನಿಕರ ಆಕ್ರೋಶ ಸರ್ಕಾರಿ ಕೆಲ್ಸ ಅಂದ್ರೆನೆ ಅಷ್ಟು, ಕೇಳೋರಿರಲ್ಲ ಮಾಡೋರಿರಲ್ಲ ಎಂಬಂತೆ ಶ್ರೀನಿವಾಸಪುರ ತಾಲ್ಲೂಕಿನ ಆರೋಗ್ಯ ಇಲಾಖೆಯಲ್ಲಿ ವೈದ್ಯರು ನಡೆದುಕೊಳ್ಳುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಭಾರಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಆರೋಗ್ಯ ಕೇಂದ್ರದ ಹಾಗೂ ಬೈರಾಗನಹಳ್ಳಿ ಆರೋಗ್ಯ ಕೇಂದ್ರದ ವೈದ್ಯರು ಬೆಳಗ್ಗೆ ೧೧ ಗಂಟೆಯಾದರು ಕೇಂದ್ರಗಳಿಗೆ ತೆರಳಿ ಕರ್ತವ್ಯ ನಿರ್ವಹಿಸದೆ ಕಾಲ ಕಳೆಯುತ್ತಿರುವುದು ಕಂಡು ಬಂದಿದೆ. ತಮ್ಮ ಕೈಕೆಳಗೆ ಕೆಲಸ ಮಾಡುವ ಡಿ ಗ್ರೂಪ್ ನೌಕರರಿಗೆ ಜವಾಬ್ದಾರಿ ವಹಿಸಿ ತಾವು ರಾಜಾರೋಷವಾಗಿ ಪ