ಕಸ, ರಸ್ತೆ ಗುಂಡಿ ವಿರುದ್ಧ ಆರ್.ಅಶೋಕ್ ನೇತೃತ್ವದಲ್ಲಿ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 3:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಅಶೋಕ್ ಅವರ ಸರ್ಕಾರವೇ 20 ಸಾವಿರ ಗುಂಡಿ ತೋಡಿ ಕೋರ್ಟ್ ಗೆ ಅಫಿಡವಿಡ್ ಫೈಲ್ ಮಾಡಿದ್ದಾರೆ. ಗುಂಡಿಯನ್ನ ಮುಚ್ಚುತ್ತಿದ್ದೇವೆ ಅಂತ ಅವರಿಗೆ ಗೊತ್ತು. ಅವರ ಕ್ಷೇತ್ರಗಳಿಗೆಲ್ಲ ದುಡ್ಡು ಕೊಟ್ಟಿದ್ದೀವಲ್ಲಾ, ಗುಂಡಿ ಮುಚ್ಚಲಿ. ಗುಂಡಿಗಳಿಗೆ ಅವರ ಸರ್ಕಾರವೇ ಪಿತಾಮಹ. ಗುಂಡಿ ಯಾವಾಗಲೂ ಇದ್ದೇ ಇರುತ್ತದೆ. ನಡೆಯುತ್ತಲೇ ಇರುತ್ತೆ, ಮುಚ್ಚುತ್ತಲೇ ಇರುತ್ತೇವೆ. ನಮ್ಮ ಸರ್ಕಾರ ಎಷ್ಟು ಕೊಡಬೇಕು ಅಷ್ಟು ಕೊಡುತ್ತೆ ಎಂದರು.