ಚಿತ್ರದುರ್ಗದಲ್ಲಿಂದು ಸ್ವದೇಶಿ ಮೇಳದ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಸ್ವದೇಶಿ ಜಾಗರಣಾ ಮಂಚ್ ನ ವತಿಯಿಂದ ನಗರದ ಸೈನ್ಸ್ ಕಾಲೇಜು ಆಟದ ಮೈದಾನದಲ್ಲಿ ಸ್ವದೇಶಿ ಮೇಳ ಆಯೋಜನೆ ಮಾಡಿದ್ದು ಬಾನುವಾರ ಸಂಜೆ 5.30 ಕ್ಕೆ ಸ್ವದೇಶಿ ಮೇಳದ ಐದನೇ ದಿನದ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು ಕಣ್ವಕುಪ್ಪೆ ಗವಿ ಮಠದ ಜಗಳೂರಿನ ಶ್ರೀ ನಾಲ್ವಡಿ ಶಾಂತಲಿಂಗ ಮಹಾಸ್ವಾಮಿಗಳು, ಬಸವ ಕುಮಾರ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.