ಹನೂರು: ಸುಳ್ವಾಡಿ ವಿಷ ಪ್ರಸಾದ ದುರಂತದ ಎ–1 ಆರೋಪಿ ಇಮ್ಮಡಿಮಹದೇವಸ್ವಾಮಿ ಮಂಗಳವಾರ ಮಧ್ಯಾಹ್ನ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಹೈಕೋರ್ಟ್ ಮಂಜೂರು ಮಾಡಿದ ಷರತ್ತುಬದ್ಧ ಜಾಮೀನು ಪಡೆದ ತಕ್ಷಣವೇ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರನ್ನು ವಕೀಲ ಸಿದಾರ್ಥ್ ಅವರು ಕರೆದುಕೊಂಡು ಬಂದಿದ್ದಾರೆ. ಇಮ್ಮಡಿಮಹದೇವಸ್ವಾಮಿ ಸೋಮವಾರ ಮೈಸೂರು ಜೈಲಿನಿಂದ ಬಿಡುಗಡೆಗೊಂಡಿದ್ದು, ಜಾಮೀನು ಸಂಬಂಧಿತ ಕೆಲ ನ್ಯಾಯಾಲಯ ಪ್ರಕ್ರಿಯೆಗಳ ನಿಮಿತ್ತ ಇಂದು (ಮಂಗಳವಾರ) ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಅವರು ಖಾವಿ ವಸ್ತ್ರಗಳನ್ನು ಬದಲಿಸಿ ಶ್ವೇತ ವಸ್ತ್ರದಲ್ಲಿ ನ್ಯಾಯಾಲಯಕ್ಕೆ ಬಂದಿರುವುದು ಗಮನಾರ್ಹವಾಗಿತ್ತು