ದಾಂಡೇಲಿ: ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಪತ್ರಕರ್ತರಿಂದ ಯಲ್ಲಾಪುರಕ್ಕೆ ಕ್ಷೇತ್ರ ಭೇಟಿ
ದಾಂಡೇಲಿ : ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಪತ್ರಕರ್ತರಿಂದ ಇಂದು ಭಾನುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಯಲ್ಲಾಪುರದ ಸಸ್ಯೋದ್ಯಾನಕ್ಕೆ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯ್ತು. ಕಾರ್ಯನಿರತ ಪತ್ರಕರ್ತರ ಸಂಘ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲೂಕು ಸಂಘದ ಸಂಯುಕ್ತ ಆಶ್ರಯದಡಿ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೂರು ತಾಲೂಕಿನ ಪತ್ರಕರ್ತರು ಭಾಗವಹಿಸಿದ್ದರು.