ಕಲಬುರಗಿ: ಭಂಕೂರು ಕ್ರಾಸ್ ಬಳಿ ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಮೇಲಿನ ದಾಳಿ ಪ್ರಕರಣದಲ್ಲಿ ಶಹಬಾದ್ ಪೊಲೀಸರಿಂದ ಐದು ಜನ ಆರೋಪಿಗಳ ಬಂಧನ
ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಕ್ರಾಸ್ ಬಳಿ ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ, ಶಹಬಾದ್ ನಗರ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ.. ಈ ಬಗ್ಗೆ ಸೆ15 ರಂದು ಬೆಳಗ್ಗೆ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಶುಭಂ @ ಟೆಕ್ಕಿ, ಮಲ್ಲಿಕಾರ್ಜುನ, ವಿಕ್ರಮ್, ಬಸವರಾಜ್, ಸುನೀಲ್ ಸೇರಿದಂತೆ ಐವರನ್ನ ಬಂಧಿಸಲಾಗಿದೆ. ಇನ್ನೂ ಬಂಧಿತರಿಂದ 2 ತಲವಾರ್, 1 ಕೊಡಲಿ, ಬುಲೆರೋ ವಾಹನ ಸೇರಿದಂತೆ ಇನ್ನಿತರ ವಸ್ತುಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ..